ನಾಯಿ ಕಚ್ಚಿದವರಿಗೆ ರಾಜ್ಯ ಸರ್ಕಾರದಿಂದ ಸಿಗಲಿದೆ 2 ಸಾವಿರದಿಂದ 10 ಸಾವಿರ ರೂಪಾಯಿ ಪರಿಹಾರ.
ನಗರದಲ್ಲಿ ದಿನೇ ದಿನೇ ಬೀದಿ ನಾಯಿಗಳ ಹಾವಳಿ ಹೆಚ್ಚಾಗುತ್ತಿದೆ. ಈ ಪರಿಣಾಮ ಬೀದಿ ನಾಯಿಗಳ ದಾಳಿಗೆ ಮಕ್ಕಳು ಸೇರಿದಂತೆ ದೊಡ್ಡವರು ಒಳಗಾಗುತ್ತಿರೋದು ಹೆಚ್ಚುತ್ತಿದೆ. ಆದ್ರೇ ಅನೇಕರಿಗೆ ಗೊತ್ತಿರದ ವಿಷಯವೇನೆಂದರೆ…..
ನಾಯಿ ಕಚ್ಚಿದರೂ ಬಿಬಿಎಂಪಿಯಿಂದ 2 ಸಾವಿರದಿಂದ 10 ಸಾವಿರದವರೆಗೆ ಪರಿಹಾರ ಸಿಗುತ್ತದೆ ಎನ್ನುವುದು. ಜೊತೆಗೆ ಚಿಕಿತ್ಸಾ ವೆಚ್ಚ ಕೂಡ ಬಿಬಿಎಂಪಿಯಿಂದಲೇ ಪಾವತಿಸಲಾಗುತ್ತದೆ ಎಂಬುದಾಗಿದೆ. ಈ ಮಾಹಿತಿ ಬೆಂಗಳೂರಿಗರಿಗೆ ಗೊತ್ತಿರದ ಕಾರಣ, ಈವರೆಗೆ ಪರಿಹಾರ ಪಡೆದವರು ಮಾತ್ರ ಕೇವಲ 25 ಮಂದಿಯಾಗಿದ್ದಾರೆ.
ಹೌದು.. ಬಿಬಿಎಂಪಿಯಿಂದ ನಾಯಿ ಕಚ್ಚಿದರೂ ಪರಿಹಾರ ನೀಡಲಾಗುತ್ತಿದೆ. ಅದು ಯಾವ ಮಟ್ಟದಲ್ಲಿ ಎಂಬುದನ್ನು ಆಧರಿಸಿ ಬಿಬಿಎಂಪಿಯಿಂದ 2 ಸಾವಿರದಿಂದ 10 ಸಾವಿರದವರೆಗೆ ಪರಿಹಾರ ನೀಡಲಾಗುತ್ತಿದೆ. ಇದಷ್ಟೇ ಅಲ್ಲದೇ ನಾಯಿ ದಾಳಿಗೆ ಒಳಗಾದವರಿಗೆ ಬಿಬಿಎಂಪಿಯೇ ಚಿಕಿತ್ಸಾ ವೆಚ್ಚವನ್ನು ಕೂಡ ಭರಿಸಲಿದೆ.
ನಾಯಿ ಕಚ್ಚಿದವರಿಗೆ ರಾಜ್ಯ ಸರ್ಕಾರದಿಂದ ಸಿಗಲಿದೆ 2 ಸಾವಿರದಿಂದ 10 ಸಾವಿರ ರೂಪಾಯಿ ಪರಿಹಾರ.
ಅಂದಹಾಗೇ ಈ ಪರಿಹಾರವನ್ನು ಹೈಕೋರ್ಟ್ ನಿರ್ದೇಶನದ ಮೇರೆಗೆ ಕಳೆದ ಎಂಟು ವರ್ಷಗಳಿಂದ ನೀಡಲಾಗುತ್ತಿದೆ. ವಿಪರ್ಯಾಸವೆಂದ್ರೇ.. ಈ ಮಾಹಿತಿ ಸರಿಯಾಗಿ ತಿಳಿಯದೇ ಬೆಂಗಳೂರಿನಲ್ಲಿ 7 ವರ್ಷಗಳಲ್ಲಿ 32 ಸಾವಿರ ಮಂದಿ ನಾಯಿ ಕಡಿತಕ್ಕೆ ಒಳಗಾಗಿದ್ದರೂ ಪರಿಹಾರ ಪಡೆದವರು ಮಾತ್ರ ಕೇವಲ 25 ಮಂದಿಯಾಗಿದ್ದಾರೆ.
KSP Recruitment 2022|5050 constable jobs|ಕರ್ನಾಟಕ ಸ್ಟೇಟ್ ಪೊಲೀಸ್ ನೇಮಕಾತಿ 2022.
ಆದ್ದರಿಂದ ಬಿಬಿಎಂಪಿ ವ್ಯಾಪ್ತಿಯ ಜನರೇ ಗಮನಿಸಿ.. ನಾಯಿ ಕಡಿತದಿಂದ ತರಚಿದಂತ ಗಾಯವಾದ್ರೇ ಪ್ರತಿ ಗಾಯಕ್ಕೆ ರೂ.2 ಸಾವಿರ, ಆಳವಾದ ಗಾಯಕ್ಕೆ ರೂ.3 ಸಾವಿರ, ಗಾಯಗಳ ಸಂಖ್ಯೆ ಹೆಚ್ಚಿದ್ದರೇ 10 ಸಾವಿರ ಪರಿಹಾರವನ್ನು ಬಿಬಿಎಂಪಿ ನೀಡಲಿದೆ. ಒಂದು ವೇಳೆ ನಾಯಿ ಕಚ್ಚಿ ಮಕ್ಕಳು ಅಸುನೀಗಿದ್ರೇ.. 50 ಸಾವಿರ ಹಾಗೂ ವ್ಯಕ್ತಿ ಸಾವನ್ನಪ್ಪಿದ್ರೇ 1 ಲಕ್ಷ ಕೂಡ ಪರಿಹಾರ ನೀಡಲು ಬಿಬಿಎಂಪಿ ಮಾರ್ಗಸೂಚಿಯನ್ನು ರಚಿಸಿದೆ.